Total Pageviews

Monday, March 21, 2011

ಈ ಪರೀಕ್ಷೆಗಳು ಯಾಕಾದರು ಬರುತ್ತವೊ??

ಪ್ರತಿ ವರ್ಷ ಮಾರ್ಚಿ ತಿಂಗಳು ಬಂತೆಂದರೆ ಇಡೀ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಕಾಡೊ ಗುಮ್ಮ ಅಂದರೆ ಈ ಪರೀಕ್ಷೆ. ಈ ಪರೀಕ್ಷೆಗಳನ್ನ ಜಗತ್ತಿಗೆ ಪರಿಚಯಿಸಿ ಆ ಪುಣ್ಯಾತ್ಮ ಯಾರೋ?? ಆ ವ್ಯಕ್ತಿಯ ಬಗ್ಗೆ ಅದೆಷ್ಟು ಕೋಪ ಇದೆಯೆಂದರೆ ಆತನನ್ನು google ನಲ್ಲೂ ಹುಡುಕಿದೆ. ಆತ ಬದುಕುಳದಿದ್ದರೆ ಒಂದು ಕೈ ನೋಡಿಕೊಳ್ಳೋಣ ಅಂಥಾ. ಚಲನಚಿತ್ರ ನಾಯಕಿಯರನ್ನು ಹೊರತುಪಡಿಸಿ ವಿದ್ಯಾರ್ಥಿಗಳ ನಿದ್ದೆ ಕೆಡಿಸುತ್ತಿರುವ ವ್ಯಕ್ತಿ ಬಹುಶಃ ಅವನೊಬ್ಬನೆ ಅನಿಸುತ್ತದೆ.

ಆ ಮೂರ್ಖನನ್ನು ಬಿಡಿ ನಮಗೆ ಪಾಠ ಹೇಳೊ ಗುರುಗಳಿಗಾದರೂ ಬುದ್ಧಿ ಬೇಡವೇ?? ಹೇಳುವುದು ಒಂದು ಮಾಡುವುದು ಇನ್ನೊಂದು. ಪ್ರಕೃತಿಯನ್ನು ಪ್ರೀತಿಸಿ ಮಕ್ಕಳೆ ನಿಸರ್ಗ ಮಾತೆ ಮುನಿದರೆ ನಮಗೆ ಉಳಿವಿಲ್ಲ, ಒಬ್ಬೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡ ನೆಡ ಬೇಕು. ಅರಣ್ಯಗಳನ್ನ ರಕ್ಷಿಸಬೇಕು, ಹಸಿರೇ ಉಸಿರು ಎಂದು ಬಣ್ಣ ಬಣ್ಣದ ಮಾತಾಡುವ ಗುರುಗಳು ಕೂಡ ಪರೀಕ್ಷೆಯಂತಹ ಪ್ರಕೃತಿ ವಿನಾಶಕ ಕೃತ್ಯಗಳಲ್ಲಿ ತಮ್ಮನ್ನೇಕೆ ತೊಡಗಿಸಿಕೊಳ್ಳುತ್ತಾರೋ ಆ ದೇವರಿಗೆ ಗೊತ್ತು. ಸುಮಾರು ನೂರ ಹದಿನೈದು ಕೋಟಿ ಜನರಿರುವ ನಮ್ಮ ದೇಶದಲ್ಲಿ ಕಡಿಮೆ ಅಂದರು ಮೂವತ್ತು ಕೋಟಿ ವಿದ್ಯಾರ್ಥಿಗಳಿರಲ್ವಾ?? ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ವಾರ್ಷಿಕ ಪರೀಕ್ಶೆ ತರತರದ ಪ್ರವೇಶ ಪರೀಕ್ಷೆ ( ಈಗೇನ್ ಬಿಡಿ lkg ukg ಗೂ CET ಗಳಿವೆ) ಹೀಗೆ ಹತ್ತು ಹಲವಾರು ಪರೀಕ್ಷೆಗಳನ್ನ ಬರಿತಾರೆ. ಒಬ್ಬ ವಿದ್ಯಾರ್ಥಿ ವರ್ಷಕ್ಕೆ ಪರೀಕ್ಷೆಗಳಿಗೆಂದೆ ಸರಾಸರಿ ಇನ್ನೂರರಿಂದ ಮುನ್ನೂರು ಪುಟಗಳನ್ನ ಬಳುಸುತ್ತಾನೆ.ಇನ್ನು ಮೂವತ್ತು ಕೋಟಿ ವಿದ್ಯಾರ್ಥಿಗಳಿಗೆ ನೀವೆ ಲೆಕ್ಕ ಹಾಕಿ. ಪಾಪ ಈ ಪರೀಕ್ಷೆಗಳಿಂದಲೆ ಎಷ್ಟೊ ಅಮಾಯಕ ಮರಗಳು ಪ್ರಾಣ ತೆತ್ತಿವೆ. ಪ್ರತಿಯೊಂದು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲು ಉತ್ತರ ಪತ್ರಿಕೆಯ ಮೇಲೆ ಲೇಖನಿ ಇರಿಸಿದಾಗ ಮರವೊಂದರ ಬುಡಕ್ಕೆ ಕೊಡಲಿ ಇಟ್ಟಂತೆ ಭಾಸವಾಗುತ್ತದೆ ನನಗೆ. ಪ್ರಕೃತಿ ವಿನಾಶಕ್ಕೆ ನಾನು ಕಾರಣ ಎಂಬ ಪಾಪಪ್ರಜ್ನೆ ಕಾಡುತ್ತದೆ. ಅದಕ್ಕೆ ಬುದ್ಧಿ ಬಂದಾಗಿನಿಂದ ನಾನು ತರಗತಿಗಳಲ್ಲಿ ನೋಟ್ಸ್ ಬರೆಯುವುದನ್ನೇ ನಿಲ್ಲಿಸಿಬಿಟ್ಟೆ. ಯಾರೊ ಕ್ಲಾಸಿನಲ್ಲಿ ಗುರುಗಳು ಕೆಮ್ಮಿದ್ದು ಸೀನಿದ್ದನ್ನು ಅಚ್ಚುಕಟ್ಟಾಗಿ ಬರೆದಿರುವ ಪಾಪಿಗಳ ನೋಟ್ಸ್ ತೆಗೆದು ಕೊಂಡು ಮೊಬೈಲ್ ನಲ್ಲಿ ಫೋಟೊ ತೆಗೆದು ಓದುತ್ತೇನೆ. ನನ್ನ ಹಾಗೆ ನೀವು ಪ್ರಕೃತಿ ಪ್ರೇಮಿಗಳಾಗಿ. ಜಗದೀಶ್ ಚಂದ್ರ ಬೋಸರು ಹೇಳಿದ ಹಾಗೆ ಸಸ್ಯಗಳಗೂ ಜೀವ ಇದೆ ಅವುಗಳನ್ನೂ ಬದುಕಲು ಬಿಡಿ.

ಭಾರತ ದೇಶದ ಬೆಳಣಿಗೆಗೆ ಅಡ್ಡಗೋಡೆಯಾಗಿ ನಿಂತಿರವುದು ಸಹ ಈ ಪರೀಕ್ಷೆಗಳೆ. ಪೇಪರ್ ಗಳ ದುರ್ಬಳಕೆ ಜೊತೆ ಭಾರಿ ಸಮಯದ ಪೋಲಾಗುತ್ತಿದೆ. ಮೂವತ್ತು ಕೋಟಿ ವಿಧ್ಯಾರ್ಥಿಗಳು ವರ್ಷಕ್ಕೆ ಸರಾಸರಿ ಆರು ವಿಷಯಗಳಲ್ಲಿ ಹತ್ತು ಪರೀಕ್ಷೆ ಬರದರೆ 30X6X1.5=270 ಕೋಟಿ man hours ಪೋಲು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ದೊಡ್ಡವರು (ದಡ್ಡರು) ಪ್ರಶ್ನೆ ಪತ್ರಿಕೆ ತಯಾರಿಸುವಲ್ಲಿ, ಮೌಲ್ಯ ಮಾಪನ ಮಾಡುವಲ್ಲಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಕಾವಲುಕಾಯುವುದರಲ್ಲಿ ತಮ್ಮಆಮೂಲ್ಯ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಇಷ್ಟು ಸಮಯವನ್ನು ಫಲದಾಯಕ ಕಾರ್ಯಗಳಿಗೆ ಉಪಯೋಗಿಸಿದ್ದರೆ ಇಷ್ಟರಲ್ಲಿ ನಮ್ಮ ದೇಶ ನಂಬರ್ ೧ ದೇಶ ಆಗುತ್ತತ್ತೊ ಏನೊ??

ಈ ಪರೀಕ್ಷೆಗಳಿಂದ ಸಮಾಜಕ್ಕೆ ಎಳ್ಳಷ್ಟಾದರೂ ಉಪಯೋಗವಿದೆಯಾ ನೀವೆ ಹೇಳಿ?? ವಿದ್ಯಾರ್ಥಿಗಳಿಗಂತೂ ಪರೀಕ್ಷೆಯೆಂದರೆ ನರಕವೇ ಸರಿ.ಸರಿಯಾಗಿ ಊಟ ನಿದ್ರೆ ಇಲ್ಲ. ಫ಼ೇಲಾದರೆ ಮಹಾ ಮಂಗಳಾರತಿ. ಪಾಸಾಗಿದ್ದರೆ ಪಕ್ಕದ ಮನೆ ಪದ್ಮಳ ಅಂಕಗಳೊಂದಿಗೆ comparison ಪ್ರತಿಯೊಂದು ಕಡಿಮೆ ಅಂಕಕ್ಕೂ ಬೈಗುಳ. ಅಪ್ಪಿ ತಪ್ಪಿ first rank ಬಂದಿರೆಂದುಕೊಳ್ಳಿ ಆಗಲೂ ಅಷ್ಟೆ "ನೋಡೊ ಇದೊಂದು ಸಾರಿ first rank ಬಂದರೆ ಸಾಲಲ್ಲ ಮುಂದೇನೂ ಹೀಗೆ ಬರಬೇಕು" ಅಂತ ಗಡಸು ಧನಿಯಲ್ಲಿ ನುಡಿಯುವ ಅಪ್ಪಾ. ವಿದ್ಯಾರ್ಥಿಗಳಿಗ ನೆಮ್ಮದಿಯೇ ಇಲ್ಲಾ ಬಿಡಿ. ವಿದ್ಯಾರ್ಥಿಗಳ ಪೋಷಕರಿಗೆ ಬೇಗನ ಕೂದಲು ಬೆಳ್ಳಗಾಗುವಂತೆ ಮಾಡುತ್ತಿರುವುದು ಈ ಪರೀಕ್ಷೆಗಳೆ. ಅಷ್ಟೇ ಅಲ್ಲ ಪೋಷಕರಿಗೆ ರಕ್ತದ ಒತ್ತಡ ಸಕ್ಕರೆ ಕಾಯಿಲೆ ಹಾಗು ಆಗಾಗ್ಗೆ ಹೃದಯಾಘಾತದ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಮ್ಮ ಮಕ್ಕಳ ಪರೀಕ್ಷೆಗಳೆ. ಇನ್ನೂ ಟೀಚರ್ ಗಳಿಗೆ?? ಅವರಿಗೂ ಪರೀಕ್ಷೆಗಳಿಂದೇನೂ ಲಾಭ ಇಲ್ಲ. ಪ್ರಶ್ನೆ ಪತ್ರಿಕೆ set ಮಾಡ್ಬೇಕು, ಮೌಲ್ಯಮಾಪನ ಮಾಡ್ಬೇಕು. ಈ ಸಮಯನ ಮಕ್ಕಳಿಗೆ ಇನ್ನೊಮ್ಮೆ ಪಾಠ ಅರ್ಥೈಸಿ ಹೇಳಿದ್ದರೆ ಇನ್ನಷ್ಟು ವಿಶ್ವೇಶ್ವರಯ್ಯ, ಸಿ ವಿ ರಾಮನ್ ಹಾಗೆ ಇನ್ನೂ ಅನೇಕ ಬುದ್ದಿವಂತರು ದೇಶಕ್ಕೆ ಸಿಗುತ್ತಿದ್ದರೇನೋ?? ಅದಕ್ಕೆ ಹೇಳೊದು ದೊಡ್ಡವರೆಲ್ಲಾ ಜಾಣರಲ್ಲ (ಹಿನ್ನೆಲೆ ಧ್ವನಿ ನೀವೆ ಸ್ವಲ್ಪ ಗುನುಗಿ) ಚಿಕ್ಕವರೆಲ್ಲಾ ಕೋಣರಲ್ಲಾ.... ಗುರುಗಳು ಹೇಳಿದ ಮಾತುಗಳು ಒಂದು ನಿಜವಲ್ಲ ಗೆಳೆಯಾ ಒಂದು ನಿಜವಲ್ಲಾ.. ಅಂಥಾ.

ಇನ್ನು ಈ ಪರೀಕ್ಷೇಗಳೂ ಯಾವ ಪುರುಷಾರ್ಥಕ್ಕೆ ನೀವೆ ಹೇಳಿ?? ಪರೀಕ್ಷೆಗಳಿಗೆ No ಅನ್ನಿ ಪ್ರಕೃತಿ ಕಾಪಾಡಿ, ದೇಶದ ಏಳ್ಗೆಗೆ ಕೈಜೋಡಿಸಿ :)

6 comments:

  1. ನೀವು ಅಷ್ಟೆ ಸುಮಕ್ಕ ನಿಮ್ಮ ಮಗಳು ಇಂಚರಳ ಮೇಲೆ ಪರೀಕ್ಷೆಯ ಒತ್ತಡ ಹೇರಬೇಡಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :)

    ReplyDelete
  2. ಈಗ ಕ೦ಪ್ಯೂಟರಿನಲ್ಲೇ ಪರೀಕ್ಷೆಗಳು ನಡೀತವೆ. ಕರೆ೦ಟು waste :P

    ReplyDelete
  3. prathi vidyarthiya manadaaLada ingithavanna likhita roopakke tandu ondu brihath REVOLUTION anne praaraMbhisiruva ninage yashassu sigali!!:p

    ishTellla thoughts hengama come to ur braainu!!?? phull hearted support ide maa namma ella huDugarinda!! notes anne life maaDkonDiro girls bagge gottilla :p

    ReplyDelete
  4. ashtu sarala udaharanegalinda prareekshe na kadeganisakke aagalla.. Alli illi swapla badalavane aadre innu utthama parihara sigabahudu...

    ReplyDelete
  5. ದುಷ್ಯಂತ ಕುಮಾರ್ ಅವರೇ ಎ ಲೇಖನವನ್ನು satire ಎಂದು ಕರೆಯಲೇ ಹಾಸ್ಯ ಭರಿತವಾಗಿದೆ ಎಂದು ಹೇಳಲೇ ,ಒಂದು ತಿಳಿಯುತ್ತಿಲ್ಲ . .
    ಆದರೆ ಒಂದು ಮಾತಂತು ನಿಜ . . ಹಾಸ್ಯ ಪ್ರಜ್ಞೆಯಿಂದಲೇ ಈಗಿನ ಪರೀಕ್ಷಾ ಪದ್ದತಿಯ ಮೇಲೆ ಚಾಟಿ ಏಟು ಬೀಸಿದ್ದೀರಿ . .

    ReplyDelete